Saturday, June 20, 2015

ಅಂಡಮಾನಿನ ಇತಿಹಾಸ ಹೇಗೆ ಭಜರಂಗಬಲಿ ಹನುಮಾನ್'ಗೆ ಸಂಬಂಧಿಸಿದ್ದು?? ಓದಿ ಈ ಪೋಸ್ಟ್ "ಕಪಿಲಿಪಿಸಾರ(ಕಪಿ ಲಿಪಿ ಸಾರ)"




ಹನುಮಾನ್ - ಹಂಡುಮಾನ್ – ಅಂಡಮಾನ್
ಈ ಪೋಸ್ಟ್ ಅಂಡಮಾನ್ ಗೆ ಅಂಡಮಾನ್ ಎಂಬ ಹೆಸರೇ ಏಕೆ ಬಂತು ಅದಕ್ಕೆ ಕಾರಣ ಅಥವಾ ಸನ್ನಿವೇಶವನ್ನ ನನ್ನ ಈ ಪೋಸ್ಟ್ ತಿಳಿಸುತ್ತೆ.

ಆದರೆ ಅದಕ್ಕಿಂತ ಮೊದಲು ನಾನು ಹಾಕಿರೋ ಇಮೇಜ್'ನ ಒಮ್ಮೆ ನೋಡಿ, ಅದರಲ್ಲಿ ಏನು ಬರೆದಿದೆ ಅಂತಾ ಡಿಕೋಡ್ ಮಾಡೋಕೆ ಪ್ರಯತ್ನ ಪಡಿ. . . . .

ಅರ್ಥ ಆಗಲ್ಲ ಅಂತ ಗೊತ್ತು ಇರಲಿ ನಾನೇ ಹೇಳ್ತೀನಿ, ಈ ಚಿತ್ರ ಸುಮಾರು ನಾಲ್ಕು ವರ್ಷಗಳ ಹಿಂದೆ ಅಂಡಮಾನಿಗೆ ಸುನಾಮಿ ಅಪ್ಪಳಿಸಿದಾಗ್ ಅಕಸ್ಮಾತ್ ಆಗಿ ವಿಮಾನದಿಂದ ತೆಗೆದ ಚಿತ್ರ.

ಕೆಳಗೆ ಹಾಕಿರೋ ಚಿತ್ರ ನಂತರದಲ್ಲಿ ಅಲ್ಲಿ ಸಂಶೋಧನೆಗೆಂದು ಹೋದ ವಿಜ್ನಾನಿಗಳಿಗೆ ಒಂದು ಕುಡಿಕೆಯ ಮೇಲೂ ದ್ವೀಪದ ಮೇಲೆ ಬರೆದ ರಚನೆಯ ಹಾಗೆ same symbol ಸಿಕ್ಕಿದೆ ಅಂದ್ರೆ ನಿಮಗೆ ಆಶ್ಚರ್ಯ ಆಗಬಹುದು,   

ನಾವು ತಿಳಿದ ಚರಿತ್ರೆಯನಾನೇ ಬದಲಾಯಿಸುವಷ್ಟು ಪುರಾವೆ ಈ ಚಿತ್ರದಲ್ಲಿದೆ, ಅದೇ ರಾಮಾಯಣದ ಚರಿತ್ರೆ.

ರಾಮಾಯಣಕ್ಕೂ ಇಲ್ಲಿ ಸಮುದ್ರದಲ್ಲಿ ಸಿಕ್ಕ ಚಿತ್ರ ಹಾಗು ಮಡಿಕೆ ಮೇಲೆ ಚಿತ್ರಕ್ಕೆ ಹೇಗೆ ಸಂಬಂಧ ಅಂತೀರಾ? ಓದಿ

ಅದನ್ನು ಕೆತ್ತಿರುವುದು ಸಾವಿರಾರು/ಲಕ್ಷಾಂತರ ವರ್ಷಗಳ ಹಿಂದೆ, ಆದರೆ ಇದು ಸಿಕ್ಕಿದ್ದು ಎರಡನೇ ಮಹಾಯುದ್ಧದಲ್ಲಿ.

ಎರಡನೇ ಮಹಾಯುದ್ಧದ ಸಮಯದಲ್ಲಿ ಅಂಡಮಾನ್ ದ್ವೀಪಗಳು ಬ್ರಿಟಿಷರ ವಶದಲ್ಲಿದ್ದುದು ನಿಮಗೆ ತಿಳಿದಿದೆ, ಆಗಿನ ಬ್ರಿಟಿಷ್ ಅಧಿಕಾರಿಗಳು ರಾಸ್ ಐಲ್ಯಾಂಡ್ ಎಂಬ ದ್ವೀಪವನ್ನು ತಮ್ಮ ವಸಟಿಯಾ ನೆಲೆಯಾಗಿಸಿ ರಾಜ ವೈಭವದಿಂದ ಬಾಳ್ತಿದ್ರು, ಇದರ ಕುರುಹುಗಳು ಇಂದೂ ಅಲ್ಲಿ ಕಾಣೋಕೆ ಸಿಗ್ತಾವೆ.

ಈ ಮಧ್ಯೆ ಸುಭಾಷ್ ಚಂದ್ರ ಬೋಸ್, ಜೈಲಿನಿಂದ ತಪ್ಪಿಸಿಕೊಂಡು ಎಲ್ಲೆಲ್ಲೋ ಸುತ್ತಿ, ಜಪಾನ್ ಸೇರಿ ಆ ದೇಶದ ನಾಯಕರ ಬೆಂಬಲ ತಗೊಂಡು ತಮ್ಮದೇ "ಆಜಾದ್ ಹಿಂದ್" ಸೈನ್ಯವನ್ನ ಕಟ್ಟಿ ಬರ್ಮಾದ ಮೂಲಕ ಬ್ರಿಟೀಷ್ ಆಡಳಿತದ ಮೇಲೆ ದಾಳಿ ಮಾಡಲು ಆರಂಭಿಸ್ತಾರೆ. ಅದೇ ಸಮಯದಲ್ಲಿ ಜಪಾನ್'ನ ವಿಮಾನ ದಳವೂ ಅಂಡಮಾನಿನ ಬ್ರಿಟೀಷ್ ನೆಲೆಗಳ ಮೇಲೆ ದಲಿಯಾ ಶುರುಮಾಡುತ್ತೆ, ಆಗ್ ಬ್ರಿಟೀಷ್'ರ ಶೆಲ್ ದಾಳಿಯಿಂದ ಜಪಾನ್'ನ ವಿಮಾನಕ್ಕೆ ಹತ್ತಿ ಬೆಂಕಿ ತಾಗುತ್ತೆ, ಪೈಲೆಟ್ ನಿಗ್ರಹ ತಪ್ಪಿ ವಿಮಾನ "ಬಾರಾಟಂಗ್" ದ್ವೀಪದಟಾಟಾ ಹಾರುತ್ತೇ. ಸುಮಾರು 50 ಕಿ.ಮೀ ಹಾರಿ ಬಾರಾಟಂಗ್ ದ್ವೀಪದ ಗುಡ್ಡಕ್ಕೆ ಅಪ್ಪಳಿಸುತ್ತಿದ್ದಂತೆ ಅದರ ಡ್ರೈವರ್ ಹಾಗೂ ಹೆಲ್ಪರ್ ಹೊರಗೆ ಪ್ಯಾರಾಶೂಟ್ ಮುಖಾಂತರ ಹಾರಿ ಜೀವಾ ಉಳಿಸಿಕೊಳ್ತಾರೆ.

ಆದರೆ ಅವರ ಅವರ ಹಣೆಬರಹ ಸರಿ ಇರಲ್ಲ ಏನೋ ಅವರಲ್ಲಿ ಒಬ್ಬ ಅಲ್ಲಿರೋ "ಜಾರವಾ" ಅನ್ನೋ ಜನಾಂಗದ ವಿಷದ ಬಾಣಕ್ಕೆ ತುತ್ತಾಗಿ ಸಾಯ್ತಾನೆ, ಆತನ ಹೆಲ್ಪರ್ ಮಾತ್ರ ಹೇಗೋ ತಪ್ಪಿಸಿಕೊಂಡು ಆ ಕಾಡಿನಲ್ಲಿ ದಿಕ್ಕಾಪಾಲಾಗಿ ಓಡ್ತಾನೆ, ಕೊನೆಗೂ ಒಂದು ವಾರದ ನಂತರ ಆ ಕಾಡಿನಿಂದ ಆಚೆ ಬರುವಷ್ಟರಲ್ಲಿ ಅಂಡಮಾನ್ ದ್ವೀಪಗಳೆಲ್ಲ ಜಪಾನಿಯರ ವಶವಾಗಿರುತ್ತೆ, ಹೊರಗೆ ಬಂದ ಆತನನ್ನು ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಕಾರಿ ಆಗದೆ ಆಟ ಊಟ ನಿದ್ದೆ ಇಲ್ಲದೆ ಸೊರಗಿ ಸಾಯ್ತಾನೆ ಆದರೆ ಆತನ ಬ್ಯಾಗ್ ಹುಡುಕಿ ಅದರಲ್ಲಿರೋ ವಸ್ತುಗಳನ್ನ ಆತನ ಮನೆಗೆ ತಲುಪಿಸ್ಬೇಕಾದ್ರೆ ಒಂದು ಮಡಿಕೆ ಚೂರು ಸಿಗತ್ತೆ, ಆ ಮಡಿಕೆಯ ಚೂರಿನ ಮೇಲೆ ಈ ಚಿತ್ರ ಬಿಡಿಸಲಾಗಿರುತ್ತೆ.

ಅವನಿಗೆ ಆ ಮಡಿಕೆ ಆ ಕಾಡಿನಲ್ಲಿ ಸಿಕ್ಕಿದ್ದರು ಹೇಗೆ?? ಅವನು ಒಂದು ವಾರ ಆ ಕಾಡಿನಲ್ಲಿ ಓಡಾಡಿದಾಗ ಎಲ್ಲೋ ಸಿಕ್ಕ ಆ ಮಡಿಕೆ ಅವನನ್ನ ಅದರ ಮೇಲಿರೋ ಸೂರ್ಯನ ಚಿತ್ರ ಆಕರ್ಷಿಸಿರಬೇಕು ಆತ ಅದನ್ನು ನೀರು ಕುಡಿಯಲು ಉಪಯೋಗಿಸಿ ಅದನ್ನ ತನ್ನ ಬ್ಯಾಗ್'ನೊಳಗೆ ಇಟ್ಟುಕೊಂಡಿರಬಹುದು ಅಂತ ಜಪಾನ್ ಸುಮ್ಮನಾಗಿ ಅದನ್ನು ಅಣುಬಾಂಬಿನಿಂದ ಸತ್ತವರ ನೆನಪಿಗಾಗಿ ಹತ್ತು ವರ್ಷಗಳ ನಂತರ ಪ್ರದರ್ಶನವನ್ನ ಏರ್ಪಡಿಸಿರಲಾಗತ್ತೆ, ಆದರೆ ಅದನ್ನು ಯಾರು ಗಮನಿಸದೇ ಹೋದಾಗ ಅಲ್ಲೇ ಇದ್ದ ಒಬ್ಬ ಭಾರತೀಯ ಅದನ್ನು ಭಾರತಕ್ಕೆ ತರುತ್ತಾನೆ.

ಆದರೆ ನಿಮಗೆ ಗೊತ್ತಿರಲಿಕ್ಕಿಲ್ಲ ಆ ದ್ವೀಪದಲ್ಲಿ ಅಂದರೆ ಸಾವಿರಾರು ವರ್ಷಗಳಿಂದ ಯಾವ ಜನಾಂಗವೂ ಮಡಿಕೆ ಉಪಯೋಗಿಸುತ್ತಿರಲಿಲ್ಲ. ಆದರೆ "ಜಾರವಾ" ಜನಾಂಗ ಉಪಯೋಗಿಸಿತ್ತಾ?? ಇಲ್ಲ.

ಅವರು ಆಫ್ರಿಕಾದಿಂದ 65-70 ಸಾವಿರ ವರ್ಷಗಳ ಹಿಂದೆಯೆ ಅಲ್ಲಿ ಬಂದು ನೆಲೆಯಾದವರು ಅವರು ನಾಗರಿಕ ಪ್ರಪಂಚದಿಂದ ದೂರವಾಗಿಯೇ ಉಳಿದ ಜನಾಂಗದವರಾಗಿದ್ರು, ಅವರಿಗೆ ಮಡಿಕೆ ಕುಡಿಕೆಗಳ ಎಳ್ಳಷ್ಟೂ ಜ್ನಾನವಾಗಲಿ ಅದನ್ನು ಹೇಗೆ ಉಪಯೋಗಿಸಬೇಕೆ ಅಂತಲೂ ತಿಳಿದಿರಲಿಲ್ಲ. ಅಲ್ಲಿರೋ ಜನಾಂಗದವರಿಗೆ ಇತ್ತೀಚೆಗೆ ಭಾರತದ ಸರ್ಕಾರದವರು ಊಟ ಮಾಡೋಕೆ ಅಲ್ಯುಮಿನಿಯಂ ಪ್ಲೇಟ್ ಕೊಟ್ಟು ಬಂದಿದ್ದರೆ ಅವರು ಆ ಅಲ್ಯುಮಿನಿಯಂ ಪ್ಲೇಟನ್ನೆ ಕತ್ತರಿಸಿ ಚೂರುಗಳನ್ನ ಮಾಡಿ ಅದರಿಂದ ಬಾಣದ ತುದಿಗಳಿಗೆ ಉಪಯೋಗಿಸ್ತಾರೆ, ಹಾಗಾದ್ರೆ ಅಲ್ಲಿಗೆ ಮಡಿಕೆ ಹೇಗೆ ಬಂತು??

ಅದನ್ನು ತಂದಿದ್ದು ಎಷ್ಟೋ ಸಾವಿರ/ಲಕ್ಷ ವರ್ಷಗಳ ಹಿಂದೆ ಬಂದಿದ್ದ ಹನುಮಾನ್ ಹಾಗು ಅವನ ಜನರು!!! Shocking ಅಲ್ವ??

ಜಾರವಾ ಜನಾಂಗದವರಿಗೆ ಹೊರಗಿನ ಜನರನ್ನ ಕಂಡರೆ ಆಗಲ್ಲ, ಒಂದು ವೇಳೆ ಅಲ್ಲೇನಾದರೂ ಬೇರೆ ಜನ ಕಂಡುಬಂದರೆ ಹಿಂದೆ ಮುಂದೆ ನೋಡದೆ ಅವರನ್ನ ಸಾಯಿಸಿಬಿಡ್ತಾರೆ ಜಾರವಾ ಜನಾಂಗದವರು.

ರಾಮಾಯಣದ ಕಾಲಕ್ಕೆ ಹೋಗೋಣ!! ರಾಮ ಸೀತೇಯನ್ನ ಹುಡುಕುತ್ತ ಕಿಷ್ಕಿಂದೆಯ ಬಳಿ ಬಂದು ಅಲ್ಲಿ ವಾಲಿಯ ವಧೆ ಮಾಡಿ ಸುಗ್ರೀವ್ ಹನುಮಂತರ ಜೊತೆ ಶ್ರೀಲಂಕಾಕ್ಕೆ ರಾವಣನ ಮೇಲೆ ಯುದ್ಧಕ್ಕೆ ಹೋಗಿದ್ದು ನಮಗೆಲ್ಲ ಗೊತ್ತಿರೋ ವಿಷಯವೇ ಆದರೆ ಕಥೆಯಲ್ಲಿ ಟ್ವಿಸ್ಟ್ ಇರೋದೇ ಇಲ್ಲಿ.

ಆದರೆ ವಾಲಿ ಸತ್ತ ನಂತರ ಹೆದರಿ ಪರದೇಶಿಗಳಾಗಿದ್ದ ಅವನ ಕಡೆಯ ಜನ ಹಾಗು ಸುಗ್ರೀವ್ ಶ್ರೀಲಂಕಾಗೆ ಹೋದ ಮೇಲೆ ಪರದೇಶಿಗಳಾಗಿದ್ದ ಅವನ ಪ್ರಜೆಗಳಿಗೆ ಶ್ರೀಲಂಕಾದಿಂದ ಸತ್ತ ಸಾವು ನೋವುಗಳ ಸುದ್ಧಿ ತುಂಬಾನೆ ಆಘಾತಕ್ಕೀಡು ಮಾಡಿದವು, ಯಾರದೋ ಹೆಂಡತಿಯ ರಕ್ಷಣೆಗೆ ನಮ್ಮ ಕುಟುಂಬದವರು ಸಾಯ್ತಿದ್ದಾರಲ್ಲ ಹಾಗು ನಮ್ಮ ವಾಲಿಯನ್ನೇ ಕಳೆದುಕೊಂಡು ಬಿಟ್ವಲ್ಲ ಅನ್ನೋ ಕೋಪ ಅಲ್ಲಿರೋ ಜನಗಳಲ್ಲಿತ್ತು, ಸತ್ತವರ ಪತ್ನಿಯರ ಆಕ್ರಂದನ ಶಾಪವಾಗತ್ತೆ, ಇಡೀ ಕಿಷ್ಕಿಂದೆಯ ಜನ ಸುಗ್ರೀವ ಹಾಗು ಆಂಜನೇಯರ ಕಡೆಗೆ ಸಿಡಿದೇಳುತ್ತೆ.

ರಾಮಾಯಣದಲ್ಲಿ ವೀರರಂತೆ ಚಿತ್ರಿಸಲ್ಪಟ್ಟಿರೋ ಅವರು ತಮ್ಮದೇ ಜನರಿಗೆ, ತಮ್ಮದೇ ದೇಶದಲ್ಲಿ(ಕಿಷ್ಕಿಂಧ್ಯೆಯಲ್ಲಿ) ದ್ರೋಹಿಗಳಾಗಿ ಕಾಣ್ತಾರೆ. ಅಲ್ಲಿ ಭುಗಿಲೆದ್ದ ದ್ವೇಷದಿಂದ ಜನ ಅವರನ್ನು ದೇಶದೊಳಗೆ ಬಿಟ್ಟುಕೊಳ್ಳದೇ ಹೊಡೆದೊಡಿಸುತ್ತಾರೆ. ರಾಜಧಾನಿ ಬಿಟ್ಟು ಓಡಿದ ಅವರಿಗೆ ಎಲ್ಲೂ ಆಶ್ರಯ ಸಿಗದೇ ಕೊನೆಗೆ ದೋಣಿ ಹತ್ತಿ ಸಮುದ್ರದಲ್ಲಿ ತಪ್ಪಿಸಿಕೊಂಡು ಹೋದ ಅವರು ಪೂರ್ವದಲ್ಲಿನ ದ್ವೀಪಗಳನ್ನು(ಈಗಿನ ಅಂಡಮಾನ್, ನಿಕೋಬಾರ್) ಸೇರಿ ಅಲ್ಲೇ ನೆಲೆಸ್ತಾರೆ. ಆ ದ್ವೀಪಗಳೇ ಮುಂದೆ ಹನುಮಾನ್ ಅಂತಲೂ ನಂತರ ಹಂಡುಮಾನ್ ಅಂತಲೂ ಕೊನೆಗೆ ಅಂಡಮಾನ್ ಅಂತಲೂ ಹೆಸರಾಗತ್ತೆ.

ಈ ಕಥೆಯ ಸಾರಾಂಶ ಈಗಲೂ ಅಂಡಮಾನ್'ನಲ್ಲಿರೋ ಮ್ಯೂಸಿಯಮ್'ನಲ್ಲಿರೋ explainations ಹೇಳ್ತಾವೆ, ಇಂಡೋನೆಷಿಯಾದ ಜನರ ನಂಬಿಕೆಯಂತೆ ಹನುಮಾನ್, ಸೀತೆಯ ಹುಡುಕಾಟದಲ್ಲಿ ಇಂಡೋನೇಷಿಯಾದಿಂದ ಹಾರಿ ಮೊದಲು ಈ ದ್ವೀಪದಲ್ಲಿಯೇ ಹೆಜ್ಜೆ ಇಟ್ಟು, ನಂತರ ಲಂಕೆಗೆ ಹೋದನಂತೆ. ಅದಕ್ಕೆಂದೆ ಅದನ್ನ "ಹಂಡುಮಾನ್" ಎನ್ನುತ್ತಾರೆ ಅನ್ನೋ ನಂಬಿಕೆ ಅಲ್ಲಿದೆ. ಆದರೆ ಸತ್ಯವೆಂದರೆ ಇದು ಆತನ ಮತ್ತು ಅವರ ಜನರ ಮೊದಲ ಹೆಜ್ಜೆಯಲ್ಲ ಕೊನೆಯ ತಾಣವಾಗಿರಬೇಕು.

ಇದಕ್ಕೆ ಪುರಾವೆ ಇಲ್ಲ ಹೇಗೆ ನಂಬಬೇಕು ಅಂತೀರಾ?? ಅಂತಹ ಪುರಾವೆಗಳೂ ಇವೆ, ದೆಹಲಿಯಲ್ಲಿರೋ ಪಾರೋ.ಪದ್ಮನಾಭರಾವ್ ಎನ್ನುವವರು ಒಂದು ವೆಬ್'ಸೈಟಿನಲ್ಲಿ ಹೀಗೆ ಬರೀತಾರೆ.
On the basis of ‘SKANDA PURANA’, the author has identified or discovered Andaman as the legendary Gandhamadana”
ಅವರು ಹೀಗೆ ಹೇಳುವ ಹಾಗೆ, ರಾಮಾಯಣದ ಕೊನೆಯಲ್ಲಿ ಆಂಜನೆಯನು "ಗಂಧಮಾನ ಗಿರಿ" ಎಂಬ ಸ್ಥಳಕ್ಕೆ ಹೊರಟನೆಂದು ತಿಳಿಸಿದ್ದರು ಆ ಸ್ಥಳ ಎಲ್ಲಿದೆ ಅನ್ನೋದು ಇನ್ನೂ ವಿವಾದವೇ ಆಗಿದೆ. ಆದರೆ ಸ್ಕಂದಪುರಾಣಗಳಲ್ಲಿ ಉಲ್ಲೇಖಿಸಿರೋ ಬೆಟ್ಟದ ಸಾಲುಗಳು ಅಂಡಮಾನ್ ಎಂದೇ ವಾದಿಸುತ್ತಾರೆ, ಹಾಗೆ ಯೂರೋಪಿಯನ್ನರು ಈ ದ್ವೀಪಕ್ಕೆ ಸಾವಿರಾರು ವರ್ಷಗಳಿಂದಲೇ ಬರುತ್ತಿದ್ದು ಅವರ ನಾಲಿಗೆಯಲ್ಲಿ "ಗಂಧಮಾಧನ"ವನ್ನ ಅಂಡಮಾನ್ ಆಗಿರಲೂಬಹುದು ಅಂತಾರೆ.

ಆದರೆ ಹನುಮಾನ್ ಹಾಗು ಅವರ ಜನರು ಅಂಡಮಾನ್ ದ್ವೀಪಕ್ಕೆ ಬಂದಾಗ ತಂದ ಕುಡಿಕೆಗಳೆ ಈಗ ಸಿಕ್ಕಿರೋ ಕುಡಿಕೆ ಹಾಗು ಸಮುದ್ರದಲ್ಲಿ ಕಂಡ ಆ ಚಿತ್ರಗಳು ಅನ್ನೋದು ವಿಜ್ನಾನಿಗಳ ವಾದ.

ಆದರೆ ನಂತರ ಹನುಮಾನ್ ಹಾಗು ಅವನ ಜನರ ಕಥೆ ಏನಾಯ್ತು ಅನ್ನೋದನ್ನ ನೋಡದ್ರೆ ನಿಮಗೆ ಮೊದಲೇ ತಿಳಿಸಿರೋ ಹಾಗೆ ಜಾರವಾಗಳು ಹೊರಗಿನಿಂದ ಬಂದ ಜನರನ್ನು ಜೀವಸಹಿತ ಉಳಿಸ್ತಿರಲಿಲ್ಲ ಹಾಗು ಹನುಮಾನ್ ಸೈನ್ಯದಿಂದ ಯುದ್ಧ ಘರ್ಷಣೆಯಾಗಿ ಅವರ ಸಂತತಿ ನಾಶವಾಗಿರಬಹುದು ಅನ್ನೋದು ಇತಿಹಾಸದಲ್ಲಿ ಇನ್ನೂ ಬಚ್ಚಿಟ್ಟಿರೋ ರಹಸ್ಯವೇ ಸರಿ.

ಕೊನೆಗೆ ನಿಮಗೆ ಅರ್ಥವಾಗದ್ದೂ ಒಂದು ವಿಷಯ ಉಳಿದೆ ಅಂತ ನನಗೆ ಗೊತ್ತು, ಮೇಲೆ ಹಾಕಿರೋ ಇಮೇಜ್‌'ನಲ್ಲಿರೋ ಚಿತ್ರದ meaning ಏನು ಅನ್ನೋದು!! right??

ಈಗ ಚಿತ್ರ observe ಮಾಡಿ(right to left ಓದಿ) ಮೊದಲು ಕಾಣೋದು ದೊಡ್ಡ ಸೂರ್ಯನ ಚಿತ್ರ(ಸೂರ್ಯವಂಶದವ) ನಂತರ ಚಿಕ್ಕ ಸೂರ್ಯ(ಸೂರ್ಯನ ಸೇವಕ), ನೀರಿನ ಜಾಡಿಗೆ, ನೀರಿನ ಚಿತ್ರ(ಮೂರು ಗೆರೆಗಳು), ನಂತರ ಇರುವ ಚಿತ್ರ ತೋರಿಸೋದು ಐಲ್ಯಾಂಡ್

ಅದನ್ನು Decode ಮಾಡಿದ ವಿಜ್ನಾನಿಗಳ ಪ್ರಕಾರ ಅದರರ್ಥ(right to left ಓದಿ) "ಸೂರ್ಯ ವಂಶದ ರಾಜನ ಯೋಧ/ಸೇವಕ ಸಾಗರ ದಾಟಿ ದ್ವೀಪ ಸೇರಿದ" ಅಂತ
ಇಲ್ಲಿ ಸೂರ್ಯ ವಂಶದ ರಾಜ ಎಂದರೆ "ರಾಮ" ಹಾಗು ಯೋಧ/ಸೇವಕ ಅಂದರೆ "ಹನುಮಾನ್" ಎಂದಲೂ ಅರ್ಥ.
"ರಾಮನ ಭಕ್ತನಾದ ಆಂಜನೇಯ ಸಾಗರವನ್ನು ದಾಟಿ ಅಂಡಮಾನ್ ಸೇರಿದ"

For more details about the name of Andaman you can visit and check the below links

1) http://www.knowandamans.com/2013/03/a-brief-history-of-andamans.html
2) https://en.wikipedia.org/?title=Andaman_Islands
3) http://aniidco.and.nic.in/about-andaman.php






1 comment: