Tuesday, July 7, 2015

ರಾವಣನ ಮಗಳು ಸೀತೆ

ಸೀತಾ ಮಾತೆಯು ರಾವಣನ ಮಗಳು?

ಕೆಲ ದರಿದ್ರ ಬುದ್ದಿ(ಇರದ)ಜೀವಿಗಳು, ತಮಗೆ ತಾವೇ "ಜಾತ್ಯಾತೀತ(Secular)" ಅಂತ ಕರೆದುಕೊಳ್ಳುವ ಜೀವಿಗಳು ಈಗೀಗ ರಾಮನನ್ನು ಬೈದರೆ ಸಾಕು ತಾವು Popular ಆಗ್ಬಿಡ್ತಿವಿ, ಮಾಧ್ಯಮದವರು ಬಿಟ್ಟಿ ಪ್ರಚಾರ ಕೊಟ್ಟೇ ಕೊಡ್ತಾರೆ ತಮ್ಮ image ಒಳ್ಳೇಯದಾಗಿಯೋ ಕೆಟ್ಟದಾಗಿಯೋ ಒಟ್ನಲ್ಲಿ famous ಆಗ್ಬಿಡ್ತಿವಿ ಅಂತ ಅಂದ್ಕೊಂಡು ಅದರಿಂದಾನೇ ತಮ್ಮ ಹೊಟ್ಟೆ ತುಂಬಿಸಿಕೊಳ್ತಿದಾರೆ, ಇರಲಿ ರಾಮನನ್ನ ಬೈದುಕೊಳ್ಳಲಿ ಅದರಿಂದ ಅವರ ಹೊಟ್ಟೆ ತುಂಬಿಸಿಕೊಳ್ಳೋದಾದರೆ ಇರಲಿ ಆ ರಾಮನನ್ನು ದಿನಂಪ್ರತಿ ನೆನೆಯುತ್ತಿರುವ ಅವರೇ "ನಿಜವಾದ" ರಾಮನ ಭಕ್ತರು, ಆದರೆ ಅಗ್ನಿಯಷ್ಟೇ ಪವಿತ್ರಳಾದ ಸೀತಾಮಾತೆಯನ್ನ ವಿನಾಕಾರಣ ಬೈಯುತ್ತ ಅವಳನ್ನ ರಾವಣನ ಅನುಭವಿಸಿದ, ಆಕೆ ತನ್ನ ಪಾವಿತ್ರ್ಯತೆ ಕಳೆದುಕೊಂಡಿದ್ದಳು, ಲವ ಕುಶ ಯಾರ ಮಕ್ಕಳು? etc etc ತುಚ್ಛ ಮಾತನ್ನಾಡೋ ನಾಯಿಗಳಿಗೆ ಒದು ವಿಷಯವನ್ನ ತಿಳಿಸೋಕೆ ಇಷ್ಟಪಡ್ತಿನಿ.

ನೀವೇನು ರಾವಣ-ಸೀತೆಯ ಸಂಬಂಧ ಕಲ್ಪಿಸಿದ್ದೆರಲ್ಲ ಅದೆಲ್ಲ ನಿಜ ಆದರೆ ಅದು ರಾವಣ-ಸೀತೆಯ ಅನೈತಿಕ ಸಂಬಂಧ ಅಲ್ಲ ಬದಲಾಗಿ ತಂದೆ-ಮಗಳ ಸಂಬಂಧ.

ಆಶ್ಚರ್ಯವಾಯಿತಾ? ಓದಿ

ಸೀತಾಮಾತೆಯ ಜನ್ಮರಹಸ್ಯ



ನಂಬಿಕೆಗಳ ಪ್ರಕಾರ ಸೀತಾದೇವಿಯು ಭೂಮಿಯಿಂದ ಹೊರ ಬಂದವಳು. ಅಂದರೆ ಜನಕ ರಾಜನು ಒಮ್ಮೆ ಹೊಲವನ್ನು ಉಳುವಾಗ ಅದರಲ್ಲಿ ಸೀತಾದೇವಿಯು ದೊರೆತಳು. ಆಗ ಜನಕರಾಜನು ಆ ಮಗುವನ್ನು ತನ್ನ ಸಾಕು ಮಗಳಾಗಿ ಸ್ವೀಕರಿಸಿ ಸಾಕಲು ತೊಡಗಿದನು. ವಾಯುವ್ಯ ಭಾರತದಲ್ಲಿ ಕಂಡು ಬರುವ ರಾಮಾಯಣದಲ್ಲಿ ಸೀತಾ ದೇವಿಯು ಮೇನಕೆಯ ದೈವೀಕ ಮಗಳಂತೆ, ನಂತರ ಜನಕ ರಾಜನು ಆಕೆಯನ್ನು ಸಾಕು ಮಗಳಾಗಿ ಸ್ವೀಕರಿಸಿದನಂತೆ. ಇನ್ನೂ ಕೆಲವು ಗ್ರಂಥಗಳ ಪ್ರಕಾರ ಸೀತಾ ದೇವಿಯು ಜನಕ ರಾಜನ ನಿಜವಾದ ಮಗಳಂತೆ. ಆದರೆ ಬಹುತೇಕ ಗ್ರಂಥಗಳ ಪ್ರಕಾರ ಸೀತಾ ದೇವಿಯು ಜನಕ ರಾಜನು ಉಳುತ್ತಿದ್ದ ವ್ಯವಸಾಯದ ಭೂಮಿಯಲ್ಲಿನ ಸಾಲುಗಳಲ್ಲಿ ದೊರೆತಳಂತೆ.

ವೇದವತಿಯ ಕಥೆ


 ಇನ್ನೂ ಕೆಲವು ಕಥೆಗಳು ಹೇಳುವುದೇನೆಂದರೆ ಸೀತಾದೇವಿಯು ವೇದವತಿಯ ಅವತಾರವಂತೆ. ವೇದವತಿಯು ಒಬ್ಬ ಬ್ರಾಹ್ಮಣ ಸ್ತ್ರೀಯಾಗಿದ್ದಳು. ಈಕೆಯು ರಾವಣನಿಂದ ಬಲತ್ಕಾರಕ್ಕೆ ಒಳಪಟ್ಟಳು. ರಾವಣನಿಂದ ತನ್ನ ಪಾವಿತ್ರ್ಯಕ್ಕೆ ಭಂಗ ಬಂದ ಕಾರಣದಿಂದ, ಆಕೆಯು ಅಲ್ಲಿಯೇ ಉರಿಯುತ್ತಿದ್ದ ಚಿತೆಯನ್ನು ಏರಿ ಮುಂದಿನ ಜನ್ಮದಲ್ಲಿ ರಾವಣನ ಮೃತ್ಯುವಿನ ಸಲುವಾಗಿ ಜನ್ಮ ತಾಳುವುನೆಂದು ಹೇಳಿ ಪ್ರಾಣ ಬಿಟ್ಟಳು. ಹೀಗೆ ಸೀತಾದೇವಿಯು ಜನಿಸಿದಳು.



ರಾವಣನ ಮಗಳು




ಉತ್ತರ ಪುರಾಣದ ಪ್ರಕಾರ, ಒಮ್ಮೆ ರಾವಣನು ಅಲಕಪುರಿಯ ಯುವ ರಾಣಿಯಾದ ಮೈನಾವತಿಯ ಮೇಲೆ ಕೆಟ್ಟ ಭಾವನೆಯನ್ನು ತಳೆದನಂತೆ. ಆಗ ಆಕೆಯು ರಾವಣನ ಮೇಲೆ ಸೇಡು ತೀರಿಸಿಕೊಳ್ಳುವ ಶಪಥ ಮಾಡಿದಳಂತೆ. ಮುಂದೆ ಆಕೆ ರಾವಣ ಮತ್ತು ಮಂಡೋದರಿಯರ ಮಗಳಾಗಿ ಜನಿಸಿದಳಂತೆ. ಆದರೆ ಜ್ಯೋತಿಷ್ಯಗಳ ಆ ಮಗುವು ಸಾಮ್ರಾಜ್ಯವನ್ನು ನಾಶ ಮಾಡುತ್ತದೆ ಎಂದು ಭವಿಷ್ಯ ನುಡಿದರಂತೆ. ಆಗ ರಾವಣನು ಆ ಮಗುವನ್ನು ಕೊಲ್ಲುವಂತೆ ತನ್ನ ಸೇವಕನಿಗೆ ಆದೇಶ ಮಾಡಿದನಂತೆ. ಆದರೆ ಆ ಸೇವಕನು ಆ ಮಗುವನ್ನು ಕೊಲ್ಲಲಿಲ್ಲವಂತೆ, ಅವನು ಆ ಮಗುವನ್ನು ಮಿಥಿಲೆಯಲ್ಲಿ ಹೂತಿಟ್ಟು ಹೋಗಿಬಿಟ್ಟನಂತೆ. ಅದೇ ಮಗುವೇ ಜನಕ ರಾಜನಿಗೆ ದೊರೆಯಿತಂತೆ. ಅವಳೇ ಸೀತೆ.




 ರಾವಣ ತನ್ನ ಮಗಳನ್ನು ತ್ಯಜಿಸಿದ್ದು

ಜೈನ ರಾಮಾಯಣಗಳಲ್ಲಿ, ಸೀತೆಯು ರಾವಣನ ಮಗಳಾಗಿಯೇ ಜನಿಸಿದಳೆಂದು ಚಿತ್ರಿತಗೊಂಡಿದೆ. ಅಲ್ಲಿಯೂ ಸಹ ಜ್ಯೋತಿಷ್ಯಗಳು ರಾವಣನ ಜ್ಯೇಷ್ಠ ಪುತ್ರಿಯಿಂದ ಕುಲ ನಾಶವೆಂದು ಭವಿಷ್ಯ ನುಡಿಯುತ್ತಾರೆ. ಆದ್ದರಿಂದ ರಾವಣನು ಆ ಮಗುವನ್ನು ತುಂಬಾ ದೂರ ತೆಗೆದುಕೊಂಡು ಹೋಗಿ, ನೆಲದಲ್ಲಿ ಊತು ಹಾಕುವಂತೆ ತನ್ನ ಸೇವಕರಿಗೆ ಆದೇಶ ನೀಡುತ್ತಾನೆ. ಅವರು ಹಾಗೆಯೇ ಮಾಡಿದರು. ಆ ಮಗುವು ಜನಕನಿಗೆ ದೊರೆತು, ಜಾನಕಿಯಾಗಿ ಅಲ್ಲಿಯೇ ಬೆಳೆದು ದೊಡ್ಡವಳಾದಳು.


ರಾವಣನಿಗೆ ಸೀತೆಯ ಕುರಿತಾದ ಪ್ರೀತಿ


ರಾವಣನು ಸೀತೆಯನ್ನು ಇಷ್ಟಪಟ್ಟನು. ಆದರೆ ಆ ಪ್ರೀತಿಯು ಒಬ್ಬ ತಂದೆ ಮಗಳೆಡೆಗೆ ಹೊಂದಿದ್ದ ಪ್ರೀತಿಯಾಗಿತ್ತು. ಈ ವರ್ಣನೆಯು ನಮಗೆ ದೊರೆಯುವುದು ಜೈನ ರಾಮಾಯಣದಲ್ಲಿ. ಅದರ ಪ್ರಕಾರ ಸೀತೆಯು ಮಂಡೋದರಿಗೆ ಜನಿಸಿದಾಗ ರಾವಣನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಮುಂದೆ ಈಕೆ ಕುಲ ಕಂಟಕಳಾಗುತ್ತಾಳೆ ಎಂಬ ಜ್ಯೋತಿಷ್ಯಗಳ ಭವಿಷ್ಯವನ್ನು ಕೇಳಿದ ನಂತರ ರಾವಣನು ಈ ಮಗುವನ್ನು ದೂರಕ್ಕೆ ತೆಗೆದುಕೊಂಡು ಹೋಗಲು ಆದೇಶ ನೀಡಿದನು. ಆದರೆ ರಾವಣನು ಆ ಮಗುವಿನ ಮೇಲೆ ನಿಗಾವಹಿಸಿದ್ದನು. ಯಾವಾಗ ಜನಕ ರಾಜನಿಗೆ ಈ ಮಗುವು ದೊರೆತು, ಆತ ಆ ಮಗುವನ್ನು ತನ್ನ ಸಾಕು ಮಗಳಾಗಿ ಬೆಳೆಸುತ್ತಿದ್ದಾನೆ ಎಂದು ತಿಳಿಯಿತೋ, ಆಗ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ತನ್ನ ಮಗಳು ಯುವರಾಣಿಯಾಗಿ ಬೆಳೆಯುತ್ತಿರುವುದನ್ನು ಈತನು ಆಗಾಗ ಕಾಣುತ್ತಿದ್ದನು. ಅಷ್ಟೇ ಅಲ್ಲ ಇದರಲ್ಲಿ ರಾವಣನು ಸೀತಾ ಸ್ವಯಂವರಕ್ಕೆ ಆಗಮಿಸಿ, ಆ ವಿವಾಹಕ್ಕೆ ತಾನು ಸಾಕ್ಷಿಯಾಗುತ್ತಾನೆ. ಆರ್ಯು ಪುತ್ರನಾದ ಕ್ಷತ್ರಿಯ ರಾಮನನ್ನು ಸೀತೆಯು ವರಿಸಿದ್ದಕ್ಕೆ ರಾವಣನು ಸಂತೋಷವನ್ನು ಪಡುತ್ತಾನೆ. ಆದರೆ ಎಲ್ಲವೂ ಸರಿಯಾಗಿರುತ್ತದೆ. ರಾಮನು 14 ವರ್ಷ ವನವಾಸಕ್ಕೆ ಹೋಗುವವರೆಗು.

 ಸೀತಾ ದೇವಿಯ ಅಪಹರಣ: ತಂದೆ ಪ್ರೀತಿಯೇ ಅಥವಾ ದ್ವೇಷವೇ?

ಯಾವಾಗ ರಾವಣನು ಸೀತೆಯು ರಾಮನೊಂದಿಗೆ ವನವಾಸವನ್ನು ಮಾಡುತ್ತಿರುವುದನ್ನು ತಿಳಿದನೋ, ಆಗಲೇ ಅವನು ತನ್ನ ಮಗಳನ್ನು ಅಪಹರಿಸಿ, ಆಕೆ ಅನುಭವಿಸುತ್ತಿರುವ ದುಃಖಕ್ಕೆ ಅಂತ್ಯ ಹಾಡುವ ತೀರ್ಮಾನಕ್ಕೆ ಬಂದನು. ಆದ್ದರಿಂದ ಆತನು ಸೀತೆಯನ್ನು ಅಪಹರಿಸಿ, ಲಂಕೆಗೆ ತಂದನು. ಜನರು ಇದನ್ನು ರಾಮ ಮತ್ತು ಲಕ್ಷ್ಮಣರ ದ್ವೇಷದ ಪ್ರತೀಕವಾಗಿ ಕಂಡರು. ಲಕ್ಷ್ಮಣನು ರಾವಣನ ತಂಗಿಯ ಮೂಗನ್ನು ಕತ್ತರಿಸಿದ್ದನು. ಆದರೆ ಅದು ತಂದೆಯು ತನ್ನ ಮಗಳನ್ನು ದುಃಖದಿಂದ ಪಾರು ಮಾಡುವ ಕೃತ್ಯವಾಗಿತ್ತು. ಯಾವಾಗ ರಾವಣನು ಸೀತೆಯ ಹೆಸರನ್ನು ಮಲಗಿರುವಾಗಲು ಕನವರಿಸಲು ಆರಂಭಿಸಿದನೊ, ಆಗ ರಾವಣನ ಹೆಂಡತಿ ಮಂಡೋದರಿ ಸಹ ರಾವಣನನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಳು.

ರಾವಣನ ಅಂತ್ಯ



ಸೀತೆ ರಾವಣನ ಮಗಳೋ ಅಥವಾ ಅಲ್ಲವೋ, ಆದರೆ ರಾವಣನ ಅಂತ್ಯಕ್ಕೆ ಸೀತೆಯೆ ಕಾರಣಳಾದಳು. ಮೂಲಗಳ ಪ್ರಕಾರ ರಾವಣನು ಸೀತೆಯನ್ನು ರಾಮನಿಗೆ ಒಪ್ಪಿಸಲಿಲ್ಲ. ಆತನಿಗೆ ಸೀತೆಯು ರಾಮನೊಂದಿಗೆ ಮರಳಿ ವನವಾಸಕ್ಕೆ ಹೋಗುವುದು ಇಷ್ಟವಿರಲಿಲ್ಲ. ಈ ವಿಚಾರ ರಾವಣನಲ್ಲಿದ್ದ ತಂದೆಯ ಮನಸ್ಸಿಗೆ ಒಪ್ಪದ ವಿಷಯವಾಗಿತ್ತು. ಅದಕ್ಕಾಗಿ ಆತ ರಾಮನ ಮೇಲೆ ಉಗ್ರವಾದ ಹೋರಾಟವನ್ನೆ ಮಾಡಿದನು. ಅದರಲ್ಲಿ ತಾನೂ ಮಡಿದನು. ಕೊನೆಗೆ ಜ್ಯೋತಿಷ್ಯಗಳ ಭವಿಷ್ಯವು ನಿಜವಾಯಿತು.




5 comments:

  1. ನಿಜವಾಗಿಯೂ ರಾವಣನ ಬಗ್ಗೆ ಕೆಟ್ಟ ವಿಚಾರ ಇತ್ತು ಈ ವಿಷಯಗಳನ್ನು ಓದಿದಾಗ ಆ ವಿಚಾರಗಳು ಸುಳ್ಳು ಅಂತ ನನ್ನ ಅನಿಸಿಕೆ

    ReplyDelete
  2. ಯಾವುದನ್ನು ಸರಿಯಾಗಿ ಓದದೆ ಅರ್ಥೈಸಿಕೊಳ್ಳಬಾರದು.ಮನುಷ್ಯನ ಯೋಚನೆಗಳು ಸಕಾರಾತ್ಮಕವಾಗಿರಬೇಕು. ಆಗಲೇ ಆನಂದ.

    ReplyDelete
  3. ಇದು ನಾನು ಯಾಕ್ಷಗಾನ ಹಾಗೂ ನನ್ನ ಗಿರಿಯರಾದ ಅಜ್ಜ ಅಜ್ಜಿ ಹಾಗೂ ಅಮ್ಮನಿಂದ ತಿಳಿದ ವಿಷಯ. ರಾವಣೇಶ್ವರ ಜೀವನದಲ್ಲಿ ವೇದಾವತಿಯ ವಿಷಯದಲ್ಲಿ ಮಾತ್ರ ತಪ್ಪಿದ್ದು. ವೇದ ಬ್ರಹ್ಮ ಮಹಾಬ್ತಾಹ್ಮಣ. ತನ್ನ ಮಗಳ ವಿಚಾರದಲ್ಲಿ ಮಹಾ ಮೋಹ ಹೊಂದಿದ್ದ. ಮಗಳು ಕಷ್ಟ ಪಡಬಾರದು ವನದಲ್ಲಿ ತಿರುಗಿ ಅಂತ ಅಶೋಕವನದಲ್ಲಿರುಸುತ್ತಾನೆ. ಲಂಕಾ ನಾಶ ಎಂದಾಗ ಮಗಳ ಮೋಹ‌ ಪ್ರಜೆಗಳ ಬಗ್ಗೆ ಕಾಳಜಿ ಇದ್ದವನು.ಮಹಾ ಶಿವ ಭಕ್ತ ಆತ ಎನ್ನುವದು ನಾನು ಕೇಳಿದ ಕತೆ..

    ReplyDelete
  4. ರಾವಣ. ಶ್ರೇಷ್ಠ. ಬ್ರಾಹ್ಮಣ. ವಾಗಿದ್ದ

    ReplyDelete